ರಾಜಭವನ ಇತಿಹಾಸ
ಬೆಂಗಳೂರಿನಲ್ಲಿರುವ ರಾಜಭವನವು ಪ್ರವಾಸಿಗರು ಸುಲಭವಾಗಿ ಭೇಟಿ ನೀಡುವಂಥ ಸ್ಥಳವಲ್ಲ. ಸಾಮಾನ್ಯ ಜನರಿಗೆ ಇದು ಇನ್ನೂ ನಿಗೂಢವಾಗಿದೆ. ವಸಾಹತುಶಾಹಿಯ ಕಾಲದಿಂದಲೂ ಈ ಕಟ್ಟಡವು ಯಾವಾಗಲೂ ಅಧಿಕಾರ ಕೇಂದ್ರಿತ ಸ್ಥಳವಾಗಿ ಉಳಿದಿದೆ ಹಾಗೂ ಇದು ಅತ್ಯುನ್ನತ ಮೌಲ್ಯಗಳನ್ನು ಪ್ರತಿನಿಧಿಸುತ್ತದೆ ಮತ್ತು ಅತ್ಯುನ್ನತ ಗೌರವಕ್ಕೆ ಪಾತ್ರವಾಗಿದೆ. ಆಡಳಿತಕ್ಕೆ ನೂತನ ಮಾರ್ಗದರ್ಶನವನ್ನು ನೀಡಿರುವಂಥ ಸರ್. ಮಾರ್ಕ್ ಕಬ್ಬನ್ ಮತ್ತು ಎಲ್.ಬಿ. ಬೌರಿಂಗ್ನಂಥ ಶ್ರೇಷ್ಠ ಆಡಳಿತಗಾರರು ಇದರ ಮೂಲದೊಂದಿಗೆ ಸಂಬಂಧ ಹೊಂದಿದ್ದಾರೆ. ಆದರೆ, ಇದರ ಇತಿಹಾಸ ನಿಗೂಢ ಕುತೂಹಲಕರವಾಗಿಯೇ ಉಳಿದಿದೆ.
ರಾಜಭವನವು ಬ್ರಿಟಿಷ್ ಯುಗವನ್ನು ಪ್ರತಿಬಿಂಬಿಸುತ್ತದೆ, ಮೈಸೂರು ಮಹಾರಾಜರ ಆಳ್ವಿಕೆಯಲ್ಲಿ ಹಾದು ನಡುವೆ ಕಮಿಷನರ್ ಆಳ್ವಿಕೆಯ ಮುಖಾಂತರ ಬ್ರಿಟಿಷರ ನೇರ ಆಡಳಿತಕ್ಕೆ ಒಳಗಾಗಿ ನಂತರ ಭಾರತದ ಸ್ವಾತಂತ್ರ್ಯಕ್ಕೆ ಸಾಕ್ಷಿಯಾಗಿ ನಿಂತು ಭಾರತ ಗಣರಾಜ್ಯಕ್ಕೆ ತನ್ನ ಪಾದಾರ್ಪಣೆ ಮಾಡಿದೆ.
ಕಮಿಷನರ್ರ ನಿವಾಸವಾಗಿ| ರೆಸಿಡೆನ್ಸಿಯಿಂದ ರಾಜಭವನದವರೆಗೆ| ರೆಸಿಡೆನ್ಸಿ ಮತ್ತು ಅದರ ನವೀಕರಣಗಳು| ರೆಸಿಡೆನ್ಸಿಯ ಗೌರವಾನ್ವಿತ ಅತಿಥಿಗಳು| ಸ್ವಾತಂತ್ರ್ಯ ನಂತರದ ಕಾಲ| ನಿವಾಸಿಗಳ ಪಟ್ಟಿ.
ಕಮೀಷನರ್ರ ನಿವಾಸವಾಗಿ
|
ಕಮೀಷನರ್ ಹುದ್ದೆಯನ್ನು ಅಲಂಕರಿಸಿದಂಥ ಬ್ರಿಟಿಷ್ ಅಧಿಕಾರಿಯೊಬ್ಬರು ತನ್ನ ಖಾಸಗಿ ನಿವಾಸವಾಗಿ ರಾಜಭವನ ಕಟ್ಟಡವನ್ನು ನಿರ್ಮಿಸಿದರು. ಅನಂತರ ಬಂದ ಕಮೀಷನರುಗಳು ಅದನ್ನು ಅವರ ಅಧಿಕೃತ ನಿವಾಸವನ್ನಾಗಿ ಮಾಡಿಕೊಳ್ಳಲು ಸರ್ಕಾರದ ಹಣದಿಂದ ಅದನ್ನು
|
ಖರೀದಿಸಿದರು. ಆ ದಿನಗಳಲ್ಲಿ ಸರ್ಕಾರವು ಬ್ರಿಟೀಷ್ ಅಧಿಕಾರಿಗಳಿಗೆ ವಸತಿ ಗೃಹಗಳನ್ನು ಒದಗಿಸುವ ಸಂಪ್ರದಾಯವಿರಲಿಲ್ಲ.
1834ರಿಂದ 1861ರ ವರೆಗೆ ಬ್ರಿಟಿಷರ ಮೈಸೂರು ಪ್ರಾಂತ್ಯದ ಕಮೀಷನರ್ ಆಗಿದ್ದಂಥ ಸರ್. ಮಾರ್ಕ್ ಕಬ್ಬನ್ರವರು ಹಣ ನೀಡಿ ಈ ಸ್ವತ್ತನ್ನು ಖರೀದಿಸಿದರು ಹಾಗೂ 1840-1842ರ ಅವಧಿಯಲ್ಲಿ ತಮ್ಮ ಅಭಿರುಚಿ ಮತ್ತು ಅವಶ್ಯಕತೆಗಳಿಗನುಗುಣವಾಗಿ ತಮ್ಮ ಸ್ವಂತ ಹಣದಿಂದ ಔಟ್ಹೌಸ್ ಮತ್ತು ಕುದುರೆ ಲಾಯಗಳೊಂದಿಗೆ ಈ ಬಂಗಲೆಯನ್ನು ಕಟ್ಟಿಸಿದರು.
1840ರಲ್ಲಿ ಮಾರ್ಕ್ ಕಬ್ಬನ್ ರವರು ಈ ಬಂಗಲೆಯನ್ನು ಕಟ್ಟಿಸಿದಾಗ, ಈ ಪ್ರದೇಶದಲ್ಲಿ ಯಾವುದೇ ಕಟ್ಟಡಗಳು ಇರಲಿಲ್ಲ. ಇದು, ಈಗ ಅಭಿವೃದ್ಧಿ ಹೊಂದುತ್ತಿರುವ ಬೆಂಗಳೂರು ಮಹಾನಗರದ ಹೃದಯ ಭಾಗವಾಗಿದೆ.
ಕಬ್ಬನ್ರವರಿಗೆ ಅರೇಬಿಯನ್ ಕುದುರೆಗಳ ಬಗ್ಗೆ ತುಂಬಾ ಒಲವಿದ್ದು, ಕನಿಷ್ಠಐವತ್ತು ಕುದುರೆಗಳನ್ನು ತಮ್ಮ ಕುದುರೆ ಲಾಯದಲ್ಲಿ ಇಟ್ಟುಕೊಂಡಿರುತ್ತಿದ್ದರು. ಔಟ್ಹೌಸ್ ಮತ್ತು ಕುದುರೆ ಲಾಯಗಳೂ ಇರುವ ಮೂಲ ಕಮೀಷನರರ ಬಂಗಲೆಯನ್ನು ಅವಿವಾಹಿತರಾಗಿದ್ದ ಕಬ್ಬನ್ರವರ ಸೀಮಿತ ಅವಶ್ಯಕತೆಗಳನ್ನು ಪೂರೈಸಲು ಮಾತ್ರ ನಿರ್ಮಿಸಲಾಗಿತ್ತು. ಕೆಲವು ಸಂದರ್ಭಗಳಲ್ಲಿ ಇದು ಅವಶ್ಯಕತೆಗಳಿಗಿಂತ ಕಿರಿದಾಗಿದ್ದು, ಅತಿಥಿಗಳ ವಾಸಕ್ಕೆ ಸೌಲಭ್ಯ ಕಲ್ಪಿಸಲು ಉದ್ಯಾನಗಳಲ್ಲಿ ಡೇರಾಗಳನ್ನು ಹಾಕಬೇಕಾಗಿತ್ತು.
ಕಬ್ಬನ್ ಅವರು ಹೋದ ನಂತರ, ಕಬ್ಬನ್ರವರ ಬಂಗಲೆ ಮತ್ತು ಇನ್ನಿತರೆ ಸ್ವತ್ತುಗಳು ಅವರ ಏಜೆಂಟ್ ಆದ ಮೇಜರ್ ಪ್ರೆಡೆರಿಕ್ ಗ್ರೇ ಅವರ ಉಸ್ತುವಾರಿಗೆ ಬಂದಿತು. ಆಗ ಬಂಗಲೆಯನ್ನು ಮಾರಾಟಕ್ಕೆ ಇಡಲಾಯಿತು. ಆದರೆ, ಕಬ್ಬನ್ರ ಆನಂತರ ಕಮೀಷನ್ರ್ ಆಗಿ ಬಂದಂತಹ ಲೆವಿನ್ ಬೆಂಥಾಮ್ ಬೌರಿಂಗ್ ಅವರು ನವೆಂಬರ್ 13, 1862 ರಂದು ಅದರ ವಿಶಾಲವಾದ ಎಸ್ಟೇಟ್ನೊಂದಿಗೆ ಆ ಬಂಗಲೆಯನ್ನು ಖರೀದಿಸಿದರು.
ನಿಮಗಿದು ಗೊತ್ತೆ?
- ಈ ಕಟ್ಟಡವನ್ನು ಖರೀದಿ ಮಾಡುವ ಮೊದಲು, ಕಮೀಷನರ್ ಅವರು ಕಟ್ಟಡಕ್ಕಾಗಿ ಮೇಜರ್ ಗ್ರೇ ಅವರಿಗೆ ತಿಂಗಳಿಗೆ 200 ರೂಪಾಯಿಗಳ ಬಾಡಿಗೆಯನ್ನು ನೀಡುತ್ತಿದ್ದರು. ಆಗ ಬೌರಿಂಗ್ರವರು ಸರ್ಕಾರಕ್ಕೆ ಈ ಕಟ್ಟಡವನ್ನು ಖರೀದಿಸದಿದ್ದಲ್ಲಿ, ಈ ಬಂಗಲೆಯು ಇಂದಿಗೂ ಖಾಸಗಿ ಸ್ವತ್ತಾಗಿರುತ್ತಿತ್ತು!
- ರಾಜಭವನ ಕಟ್ಟಡವನ್ನು 1860ಕ್ಕೂ ಮುಂಚೆ ಮಾರಾಟಕ್ಕಿಟ್ಟಾಗ, ಅಘಾ ಅಲಿ ಆಸ್ಕರ್ ಅವರು ಇದನ್ನು ಕೊಂಡುಕೊಳ್ಳಲು 28,000/- ರೂಪಾಯಿಗಳನ್ನು ಕೊಡಲು ಮುಂದಾಗಿದ್ದರು!
- ಹಳೆಯ ರೆಸಿಡೆನ್ಸಿ ಕಟ್ಟಡದ ದಕ್ಷಿಣದ ಭಾಗದ ರಸ್ತೆಯನ್ನು ಇಂದಿಗೂ ಸಹ “ರೆಸಿಡೆನ್ಸಿ ರಸ್ತೆ” ಎಂದು ಕರೆಯಲಾಗುತ್ತದೆ!
ಹಳೆಯ ರೆಸಿಡೆನ್ಸಿ ಕಟ್ಟಡ>
1831ರಲ್ಲಿ ಬೆಂಗಳೂರು ರೆಸಿಡೆನ್ಸಿ ಕೇಂದ್ರ ಸ್ಥಾನವಾದ ನಂತರ, ಮೊದಲನೇ ರೆಸಿಡೆಂಟ್ನು ಈಗ ಭಾರತೀಯ ಸ್ಟೇಟ್ ಬ್ಯಾಂಕ್ ಇರುವ ಕಟ್ಟಡದಲ್ಲಿ ನೆಲೆಸಿದ್ದರು. ಬೆಂಗಳೂರಿನಲ್ಲಿ ಬ್ರಿಟಿಷ್ ರೆಸಿಡೆಂಟರು 1831ರಿಂದ ಜನವರಿ 1843ರ ವರೆಗೆ ರೆಸಿಡೆಂಟ್ ಹುದ್ದೆಯು ರದ್ದುಗೊಳ್ಳುವವರೆಗೂ ಈ ಕಟ್ಟಡವೇ ಅವರ ನಿವಾಸವಾಗಿತ್ತು. ರೆಸಿಡೆಂಟ್ರು ಈ ಕಟ್ಟಡದಲ್ಲಿ ನೆಲೆಸಿದ್ದಾಗ, ಮಾರ್ಕ್ ಕಬ್ಬನ್ ಅವರುಕಮೀಷನರ್ ಬಂಗಲೆಯಲ್ಲಿ ವಾಸವಾಗಿದ್ದರು.
1881ರಲ್ಲಿ ಮೈಸೂರು ಮಹಾರಾಜರ ಕುಟುಂಬಕ್ಕೆ ಅಧಿಕಾರವನ್ನು ಮರಳಿ ಹಸ್ತಾಂತರಿಸುವುದರೊಂದಿಗೆ ಕಮೀಷನರ್ ಹುದ್ದೆಯನ್ನು ರದ್ದುಗೊಳಿಸಲಾಯಿತು ಹಾಗೂ ರೆಸಿಡೆಂಟ್ ಹುದ್ದೆಯನ್ನು ಪುನರ್ ಸೃಜಿಸಲಾಯಿತು. ರೆಸಿಡೆಂಟ್ಗೆ ಈ ಹಿಂದಿನ ಕಮೀಷನರುಗಳ ಬಂಗಲೆಯಲ್ಲಿ (ಎಂದರೆ, ರಾಜಭವನದಲ್ಲಿ) ವಸತಿಯನ್ನು ಕಲ್ಪಿಸಲಾಯಿತು. ನಂತರ ಅದನ್ನು ಆಗಸ್ಟ್ 15, 1947ರಂದು ಭಾರತ ಸ್ವಾತಂತ್ರ್ಯ ಪಡೆಯುವವರೆಗೆ, “ರೆಸಿಡೆನ್ಸಿ” ಎಂದು ಕರೆಯಲಾಗುತ್ತಿತ್ತು.
ಈ 66 ವರ್ಷಗಳಅವಧಿಯಲ್ಲಿ ಇಪ್ಪತ್ತಕ್ಕಿಂತ ಹೆಚ್ಚು ರೆಸಿಡೆಂಟ್ರುಗಳು ಈ ಕಟ್ಟಡದಲ್ಲಿ ವಾಸವಾಗಿದ್ದರು ಹಾಗೂ ಇದು ಕಾಲಕಾಲಕ್ಕೆ ಹಲವಾರು ಬದಲಾವಣೆಗಳನ್ನು ಹಾಗೂ ಸೇರ್ಪಡೆಗಳನ್ನು ಕಂಡಿದೆ.
‘ರೆಸಿಡೆನ್ಸಿ’ ಯಿಂದ ‘ರಾಜಭವನ’ ಆದದ್ದು
ಮೈಸೂರು ರಾಜ್ಯದ ‘ರೆಸಿಡೆನ್ಸಿ’ಯನ್ನು ಮೊದಲು 1799ರಲ್ಲಿ ಮೈಸೂರಿನಲ್ಲಿ ಸ್ಥಾಪಿಸಲಾಯಿತು. ನಂತರ ಇದನ್ನು ಕ್ರಿ.ಶ 1804ರಲ್ಲಿ ಬೆಂಗಳೂರಿಗೆ ಸ್ಥಳಾಂತರಿಸಲಾಯಿತು. ಇದು 1843ರಲ್ಲಿ ರದ್ದಾಗಿ ನಂತರ 1881ರಲ್ಲಿ ಬೆಂಗಳೂರಿನಲ್ಲಿ ಇದು ಪುನರ್ ಸೃಜನೆಯಾಗಿದ್ದು ಸಹ ಬೆಂಗಳೂರಿನಲ್ಲಿಯೇ ಆಗಿತ್ತು. ಅಂತಿಮವಾಗಿ 1947ರಲ್ಲಿ ಸಂಪೂರ್ಣವಾಗಿ ಬ್ರಿಟಿಷರು ಭಾರತವನ್ನು ಬಿಟ್ಟು ಹೊರಡುವುದರೊಂದಿಗೆ ಈ ಹುದ್ದೆ ಇಲ್ಲವಾಯಿತು.
ಕ್ರಿ.ಶ. 1799 ರಲ್ಲಿ ಟಿಪ್ಪು ಸುಲ್ತಾನನ ಪತನದ ತರುವಾಯ ಮೊದಲು ಶ್ರೀರಂಗಪಟ್ಟಣದಲ್ಲಿ ಬೀಡುಬಿಟ್ಟಂಥ ಬ್ರಿಟಿಷ್ ಸೈನ್ಯವನ್ನು ತದನಂತರ ಕ್ರಿ.ಶ. 1809ರಲ್ಲಿ ಬೆಂಗಳೂರಿನ ಸಿವಿಲ್ ಮತ್ತು ಮಿಲಿಟರಿ ಠಾಣೆಗೆ ಸ್ಥಳಾಂತರಿಸಲಾಯಿತು.
ಬೆಂಗಳೂರಿನ ಹಿತಕರವಾದ ವಾತಾವರಣವು ಆಳುವ ವರ್ಗವನ್ನು ಆಕರ್ಷಿಸಿತು ಹಾಗೂ ಬೆಂಗಳೂರಿನ ಹಳೆಯ ಪಟ್ಟಣಕ್ಕೆ ಸಮೀಪದಲ್ಲಿ ಪ್ರಸಿದ್ಧ ಮಿಲಿಟರಿ ಕಂಟೋನ್ಮೆಂಟ್ನ ಸ್ಥಾಪನೆಗೆ ಕಾರಣವಾಯಿತು. ಈ ಪ್ರದೇಶವು ಕೇವಲ ಬ್ರಿಟಿಷರ ಮಿಲಿಟರಿ ನೆಲೆಯಾಗಿರಲಿಲ್ಲ,ಜೊತೆಗೆ ಇದು ಹೆಚ್ಚಿನ ಸಂಖ್ಯೆಯ ಯುರೋಪಿಯನ್ನರು, ಆಂಗ್ಲೋ-ಇಂಡಿಯನ್ನರು ಹಾಗೂ ಮಿಷನರಿಗಳ ವಸಾಹತು ಪ್ರದೇಶವೂ ಕೂಡಾ ಆಯಿತು.
ನಿಮಗಿದು ಗೊತ್ತೇ
- ಮುಂದೆ ಬ್ರಿಟಿಷ್ ಪ್ರಧಾನಿಯಾದ ಸರ್ ವಿನ್ಸ್ಟನ್ ಚರ್ಚಿಲ್ 1897 ರಿಂದ 1900ರ ವರೆಗೆ ಬೆಂಗಳೂರಿನಲ್ಲಿ ನೆಲೆಸಿದ್ದು, ಅವರಿಗೆ ನಾಗರೀಕ ಮತ್ತು ಮಿಲಿಟರಿ ನೆಲೆಯುಆತಿಥ್ಯ ವಹಿಸಿತ್ತು.
1947ರಲ್ಲಿ ರೆಸಿಡೆನ್ಸಿಯ ಅಸ್ತಿತ್ವವು ಕೊನೆಗೊಂಡಿತು. ಗಣರಾಜ್ಯದ ಸಂವಿಧಾನವು ರಾಜಪ್ರಮುಖ ಹುದ್ದೆಯನ್ನು ಸೃಜಿಸಿತು. ಅದು ಮುಂದೆ ರಾಜ್ಯಪಾಲ ಹುದ್ದೆಯಾಯಿತು. ಹಾಗಾಗಿ, ಬೆಂಗಳೂರಿನಲ್ಲಿನ ರೆಸಿಡೆನ್ಸಿ ಆವರಣವನ್ನು ಅಲ್ಲಿಂದ ಮುಂದೆ ‘ರಾಜಭವನ’ ಎಂದು ಕರೆಯಲಾಯಿತು.
ರೆಸಿಡೆನ್ಸಿಯಿಂದ ರಾಜಭವನಕ್ಕೆ ಹೋಗುವ ಮಾರ್ಗವು ಸಾಕಷ್ಟು ದೀರ್ಘವಾಗಿದೆ. 110 ವರ್ಷಗಳ ಕಾಲಾವಧಿಯಲ್ಲಿ ಅನೇಕ ದಿಗ್ಗಜರು, ಸೇನಾ ನಾಯಕರು ಹಾಗೂ ಆಡಳಿತಗಾರರು ಈ ಮಾರ್ಗದಲ್ಲಿ ಹಾದು ಹೋಗಿದ್ದಾರೆ. ಶ್ರೀರಂಗಪಟ್ಟಣದ ಲಾಲ್ಬಾಗ್, ಇಲ್ವಾಲಾ ರೆಸಿಡೆನ್ಸಿ ಕಟ್ಟಡ, ಮೈಸೂರಿನ ಸರ್ಕಾರಿ ಭವನ ಹಾಗೂ ಪ್ರಸ್ತುತ ಬೆಂಗಳೂರಿನ ರಾಜಭವನ ಈ ಭವ್ಯ ಚರಿತ್ರೆಗೆ ಪ್ರಮುಖ ಸಾಕ್ಷಿಯಾಗಿ ನಿಂತಿವೆ.
ರೆಸಿಡೆನ್ಸಿ ಮತ್ತು ಅದರ ನವೀಕರಣಗಳು
|
ಈ ಹಿಂದೆ ‘ರೆಸಿಡೆನ್ಸಿ’ ಎಂದು ಉಲ್ಲೇಖಿಸಲಾಗುತ್ತಿದ್ದ ರಾಜಭವನವು ಮೂಲತಃ 92.3 ಎಕರೆ ಪ್ರದೇಶವನ್ನು ಒಳಗೊಂಡಿತ್ತು. ರೆಸಿಡೆನ್ಸಿ ಮೈದಾನವು ಎರಡು ಪ್ಲಾಟ್ಗಳನ್ನು ಒಳಗೊಂಡಿದೆ: ರೆಸಿಡೆನ್ಸಿ ಪಾರ್ಕ್ ರಸ್ತೆಯ ಪೂರ್ವದಲ್ಲಿ
|
ಕಟ್ಟಡಗಳನ್ನು ಒಳಗೊಂಡಿರುವ ಪ್ಲಾಟ್ 67.6 ಎಕರೆಗಳ ವಿಸ್ತೀರ್ಣವನ್ನುಹೊಂದಿದೆ ಹಾಗೂ ರೆಸಿಡೆನ್ಸಿ ಪಾರ್ಕ್ ರಸ್ತೆಯ ಪಶ್ಚಿಮಕ್ಕೆ ಇರುವ ಕಟ್ಟಡಗಳಿಲ್ಲದ ಪ್ಲಾಟ್ 24.7 ಎಕರೆಗಳಷ್ಟು ವಿಸ್ತೀರ್ಣವನ್ನು ಹೊಂದಿದೆ.
ಕಾಲಾನಂತರದಲ್ಲಿ ಅನೇಕ ರೆಸಿಡೆಂಟರು ಮಾರ್ಕ್ ಕಬ್ಬನ್ ರವರು ನಿರ್ಮಿಸಿದ ಈ ರೆಸಿಡೆನ್ಸಿ ಕಟ್ಟಡವನ್ನು ಬದಲಾಯಿಸಿದರು, ಮಾರ್ಪಡಿಸಿದರು, ಸುಧಾರಿಸಿದರು ಹಾಗೂ ಸುಂದರವಾಗಿ ಕಾಣುವಂತೆ ಮಾಡಿದರು. ರಾಜಭವನವು ಪ್ರಾರಂಭದಲ್ಲಿ ಒಂದೇ ಅಂತಸ್ತಿನ ಕಟ್ಟಡವಾಗಿದ್ದು, ಇಡೀ ಪ್ಲಾಟ್ ಅತ್ಯಂತ ಎತ್ತರದ ಸ್ಥಳದಲ್ಲಿದೆ. ಮಾರ್ಕ್ ಕಬ್ಬನ್ ತರುವಾಯ ರೆಸಿಡೆಂಟ್ರು ತಮ್ಮ ಹೆಚ್ಚು ಬೇಡಿಕೆಯ ಅವಶ್ಯಕತೆಗಳಿಗೆ ಸರಿ ಹೊಂದುವಂತೆ ಅನೇಕ ಸೇರ್ಪಡೆಗಳನ್ನು ಮಾಡಿದ್ದಾರೆ. ಇದು, ಮೈಸೂರು ರಾಜ್ಯದ ಬ್ರಿಟಿಷ್ ರೆಸಿಡೆಂಟ್ರ ಅಧಿಪತ್ಯದಲ್ಲಿನ ಪ್ರದೇಶವಾಗಿದ್ದು, ಅವರು ನೇರವಾಗಿ ರಾಣಿಯ ಆಳ್ವಿಕೆಯಲ್ಲಿದ್ದ ವಸಾಹತುಗಳ ಮೇಲೆ ಅಧಿಪತ್ಯ ಸಾಧಿಸುವ ವಿಶೇಷಅವಕಾಶವನ್ನು ಹೊಂದಿದ್ದರು. ಆದ್ದರಿಂದ, ಕಟ್ಟಡದಅಲಂಕಾರ ಮತ್ತು ಘನತೆಯು ಇಡೀ ಭಾರತದಲ್ಲಿಯೇ ಅತಿಶಯವಾಗಿದೆ.
1874ರಲ್ಲಿ ಮುಂದೆ ಕಿಂಗ್ ಎಡ್ವರ್ಡ್ VIIಎನಿಸಿಕೊಂಡ ಪ್ರಿನ್ಸ್ ಆಫ್ ವೇಲ್ಸ್ ಭಾರತಕ್ಕೆ ಭೇಟಿ ನೀಡಿದಾಗ ಬಾಲ್ ರೂಮ್ ಅನ್ನು ನಿರ್ಮಿಸಲಾಯಿತು. ರಾಜಕುಮಾರನನ್ನು ಹಡಗಿನಲ್ಲಿ ಭಾರತಕ್ಕೆ ಕರೆತಂದ ನಂತರ ಅದಕ್ಕೆ ‘ಸೆರಾಪಿಸ್ ಕೋಣೆ’ ಎಂದು ಹೆಸರಿಡಲಾಯಿತು. ದೊಡ್ಡದಾದ ಕಿಟಕಿಗಳನ್ನು ಹಾಕಲಾಯಿತು ಮತ್ತು ಬಿಳಿ ಹಾಗೂ ಚಿನ್ನದ ಬಣ್ಣದಲ್ಲಿ ಪೇಂಟ್ ಮಾಡಲಾಯಿತು. ಅದೇ ಸಮಯದಲ್ಲಿ ದರ್ಬಾರ್ ಹಾಲ್ ಅನ್ನೂ ಸಹ ಕೆಂಪು ಮತ್ತು ಚಿನ್ನದ ಬಣ್ಣದ ವಸ್ತುಗಳಿಂದ ಮರುರೂಪಿಸಲಾಯಿತು.
ಈ ಅವಧಿಯಲ್ಲಿ ಒಂದು ಬಿಲಿಯರ್ಡ್ಸ್ ಟೇಬಲ್ ಅನ್ನು ಸಹ ಖರೀದಿಸಲಾಯಿತು. 1909ರಲ್ಲಿ ಸರ್ ಸ್ಟುವರ್ಟ್ ಮಿಟ್ಪೋರ್ಡ್ ಫ್ರೇಸರ್ ರೆಸಿಡೆಂಟರಾಗಿದ್ದಾಗ, 81 ಪಯೋನಿಯರ್ಸ್ ರೆಜಿಮೆಂಟ್ ಬರ್ಮೀಸ್ ಗಂಟೆಯೊಂದನ್ನು ಕಾಣಿಕೆ ನೀಡಿತು. ತರುವಾಯ ಅದನ್ನು ರೆಸಿಡೆನ್ಸಿಯಲ್ಲಿ ಹಾಕಲಾಯಿತು. ಆದರೆ, ಆ ಗಂಟೆಯನ್ನು ಸುಮಾರು 1927ರಲ್ಲಿ ಸುರಂಗದ ಕೆಲಸಗಾರರು ಮತ್ತು ಗಣಿಗಾರಿಕೆಯ ಕೆಲಸಗಾರರು ತೆಗೆದುಕೊಂಡು ಹೋದರು ಎಂದು ದಾಖಲೆಗಳಲ್ಲಿ ಕಂಡುಬರುತ್ತದೆ.
ಸರ್ ಸ್ಟುವರ್ಟ್ ಮಿಟ್ಫೋರ್ಡ್ ಫ್ರೇಸರ್ ರೆಸಿಡೆಂಟರಾಗಿದ್ದಾಗ, ವೇಲ್ಸ್ ರಾಜಕುಮಾರನ ವಾಸ್ತವ್ಯಕ್ಕಾಗಿ ವಿಸ್ತಾರವಾದ ಮಾರ್ಪಾಡುಗಳನ್ನು ಮಾಡಲಾಯಿತು ಮತ್ತು ಕಟ್ಟಡವನ್ನು ಮರು ಅಲಂಕರಿಸಲಾಯಿತು ಮತ್ತು
|
|
ನವೀಕರಿಸಲಾಯಿತು. ಈ ಅವಧಿಯಲ್ಲಿ ಕಟ್ಟಡದ ವಿದ್ಯುದೀಕರಣವನ್ನು ಮೊದಲ ಬಾರಿಗೆ ಕೈಗೆತ್ತಿಕೊಳ್ಳಲಾಯಿತು. 1906ರ ಫೆಬ್ರವರಿಯಲ್ಲಿ ರಾಜಕುಮಾರನು ಬೆಂಗಳೂರಿಗೆ ಭೇಟಿ ನೀಡಿದ್ದರು ಮತ್ತು ರೆಸಿಡೆನ್ಸಿಯಲ್ಲಿ ಉಳಿದಿದ್ದರು.
1895-96ರಲ್ಲಿ ಸರ್ ವಿಲಿಯಂ ಮ್ಯಾಕ್ವರ್ತ್ ಅವರು ರೆಸಿಡೆಂಟ್ರಾಗಿದ್ದಾಗ ಕಾವಲು ಕೊಠಡಿಯನ್ನು ಸೇರ್ಪಡೆಗೊಳಿಸಲಾಯಿತು. ಒಂದು ಕುಬ್ಜ ಗೋಡೆ ಮತ್ತು ಮುಖ್ಯ ಗೇಟ್ನಿಂದ ಜನರಲ್ ಪೋಸ್ಟ್ಆಫೀಸ್ ಕಡೆಗೆ “ಬಾಲೂಸ್ ಟ್ರೇಡ್” (ಹಳೆಯ ಎರಕಹೊಯ್ದ ಕಬ್ಬಿಣದ ಬೇಲಿ) ಅನ್ನು ಸ್ಥಾಪಿಸಲಾಯಿತು. ಕರ್ನಲ್ ಸರ್ ಡೋನಾಲ್ಡ್ ರಾಬರ್ಟ್ಸನ್ ರೆಸಿಡೆಂಟರಾಗಿದ್ದಾಗ ಸೇವಕರಿಗೆ ತಾತ್ಕಾಲಿಕ ಗುಡಿಸಲುಗಳನ್ನು ಹಾಕಲಾಯಿತು. ನಂತರ ಅವುಗಳನ್ನು ಸರ್ ಹ್ಯಗ್ ಡಾಲಿ ಅವರು ಪಕ್ಕಾ ಕಟ್ಟಡಗಳಾಗಿ ಪರಿವರ್ತಿಸಿದರು. ಡಾಲಿ ಅವರು ನೃತ್ಯ ಸಭಾಂಗಣದ ಮೇಲ್ಛಾವಣಿಯನ್ನು ಎತ್ತರಿಸಿದರು ಮತ್ತು ಹಳೆಯ ಕಬ್ಬನ್ ಅಸೆಂಬ್ಲಿ ಕೊಠಡಿಗಳು ಮತ್ತು ನ್ಯಾಯಾಲಯಗಳ ವಸ್ತುಗಳನ್ನು ಬಳಸಿಕೊಂಡು ಬೋರ್ಡ್ಗಳಿಂದ ನೆಲಹಾಸನ್ನು ಅಳವಡಿಸಿದರು. ಮೇಲ್ಛಾವಣಿಗೆ ಮೆಟ್ಟಿಲುಗಳ ಸಾಲನ್ನು ನಿರ್ಮಿಸಲಾಯಿತು. ಹಳೆಯ ಉಗ್ರಾಣವನ್ನು ತೇಗದ ಮರಗಳಿಂದ ಪ್ರಸ್ತುತ ಇರುವ ಊಟದ ಕೋಣೆಯಾಗಿ ಪರಿವರ್ತಿಸಲಾಯಿತು. ಸಂಕೀರ್ಣವಾಗಿ ಕೆತ್ತಿದ ಅಥವಾ ಚಿತ್ರಿಸಿದ ಅಲಂಕಾರ ವಿಶಾಲ ಸಮತಲವಾದ ಚಿತ್ರ ಮತ್ತು ಬಣ್ಣದ ಡಾರ್ಮರ್ ದೀಪಗಳನ್ನು ಮಿಸ್ಟರ್ ಕಾಬ್ (1916-1920)ರ ಅವಧಿಯಲ್ಲಿ ಸೇರಿಸಲಾಯಿತು. ಎಡಭಾಗದಲ್ಲಿ ಸಣ್ಣ ಹಜಾರ ಮತ್ತು ಮುಖ ಮಂಟಪವನ್ನು ಸಹ ನಿರ್ಮಿಸಲಾಯಿತು.
ಸರ್ ವಿಲಿಯಂ ಬಾರ್ಟನ್ ರೆಸಿಡೆಂಟ್ರಾಗಿದ್ದಾಗ ಸಣ್ಣ ಪುಟ್ಟ ಬದಲಾವಣೆಗಳನ್ನು ಮಾಡಲಾಯಿತು. ಆದಾಗ್ಯೂ, ಎಸ್.ಇ. ಪಿಯರ್ಸ್ (1925-1930) ಇವರು ರೆಸಿಡೆಂಟರಾಗಿದ್ದ ಸಮಯದಲ್ಲಿ ಹೆಚ್ಚು ವಿಸ್ತರಿತ ಸುಧಾರಣೆಗಳನ್ನು ಕೈಗೊಳ್ಳಲಾಯಿತು. ಮುಖ್ಯ ಕಟ್ಟಡದ ಪ್ರವೇಶದ್ವಾರದಲ್ಲಿ ಸೂಕ್ತವಾದ ಮುಖಮಂಟಪವನ್ನು ನಿರ್ಮಿಸುವುದು ಸಹ ಇದರಲ್ಲಿ ಒಳಗೊಂಡಿದೆ. ಪ್ರಸ್ತುತ ವಿಶ್ರಾಂತಿ ಕೋಣೆಯಾಗಿರುವ ದರ್ಬಾರ್ ಹಾಲ್ನ ಸಂಪೂರ್ಣ ಮೇಲ್ಛಾವಣಿ ತುಂಬಾ ಕಡಿಮೆ ಎತ್ತರದಲ್ಲಿದ್ದು ದೋಷಯುಕ್ತವಾಗಿತ್ತು. ಎತ್ತರಿಸಿದ ಗೋಡೆಗಳ ಮೇಲೆ ಅದನ್ನು ಪುನಃ ಎತ್ತರಕ್ಕೆ ಹೆಚ್ಚಿಸಲಾಯಿತು. ನೃತ್ಯ ಸಭಾಂಗಣವನ್ನು ಅಚ್ಚುಗಳು ಸುತ್ತಿನ ತೆರೆಯುವಿಕೆಗಳು ಮತ್ತು ವಿಶೇಷವಾದ ಕೆಳ ಛಾವಣಿ ಹಾಗೂ ಮೇಲ್ಛಾವಣಿಗಳಿಂದ ಕಂಗೊಳಿಸುವಂತೆ ಮಾಡಲಾಯಿತು.
ಬಹಳ ಸಮಯದ ನಂತರ, 1967ರಲ್ಲಿ ವಿ.ವಿ. ಗಿರಿ ಮತ್ತು ಜಿ.ಎಸ್ ಪಾಠಕ್ ಅವರ ಅಧಿಕಾರಾವಧಿಯಲ್ಲಿ ವಾಸ್ತುಶಿಲ್ಪವನ್ನು ಪರಿಪೂರ್ಣವಾಗಿ ಹಳೆಯ ವಾಸ್ತುಶಿಲ್ಪದೊಂದಿಗೆಸಂಯೋಜಿಸುವ ಮೂಲಕ ಮೊದಲನೇ ಮಹಡಿಯನ್ನು ರಾಜಭವನ ಕಟ್ಟಡಕ್ಕೆ ಸೇರಿಸಲಾಯಿತು. ಆ ಸಂಯೋಜನೆ ಎಷ್ಟು ಪರಿಪೂರ್ಣವಾಗಿದೆ ಎಂದರೆ, ಅದು ಮೊದಲನೇ ಮಹಡಿ ಮೊದಲಿನಿಂದಲೂ ಇದೆಯೇನೋ ಎನ್ನುವಂತೆ ತೋರುತ್ತದೆ. ಇದನ್ನು ರಾಜ್ಯಪಾಲರ ನಿವಾಸವನ್ನಾಗಿ ಮಾಡಲಾಯಿತು.
ಇತ್ತೀಚೆಗೆ, 1994-95ರ ಅವಧಿಯಲ್ಲಿ ರಾಜ್ಯಪಾಲರಾದ ಖುರ್ಷೇದ್ ಅಲಂ ಖಾನ್ ಅವರ ಉಪಕ್ರಮದಲ್ಲಿ ಹಲವು ಮಾರ್ಪಾಡುಗಳನ್ನು ಮತ್ತು ಸೇರ್ಪಡೆಗಳನ್ನು ಮಾಡಲಾಯಿತು. 153 ವರ್ಷಗಳಷ್ಟು ಹಳೆಯದಾದ ಮುಖ್ಯ ಕಟ್ಟಡವನ್ನು ಬಲಪಡಿಸುವುದರ ಜೊತೆಗೆ, ಹೆಚ್ಚಿನ ಸೌಕರ್ಯಗಳನ್ನು ಕಲ್ಪಿಸಲಾಯಿತು. ಮದ್ರಾಸ್ ಟೆರೇಸ್ ಮೇಲ್ಛಾವಣಿಯಿಂದ ಸಮತಲವಾದ ಆರ್ಸಿಸಿ ಛಾವಣಿಗೆ ಬದಲಾಯಿಸಲಾಯಿತು. ರಾಜ್ಯಪಾಲರಾದ ಶ್ರೀಮತಿ ರಮಾದೇವಿ ಅವರ ಆಸಕ್ತಿಯಿಂದ ಬ್ಯಾಂಕ್ವೆಟ್ ಹಾಲ್ನ್ನು ಸೊಗಸಾಗಿ ನವೀಕರಿಸಲಾಗಿದೆ ಮತ್ತು ರಾಜಭವನದ ಉದ್ಯಾನಕ್ಕೆ ಗಾಜಿನಮನೆಯನ್ನು ಸೇರ್ಪಡೆಗೊಳಿಸಲಾಗಿದೆ.
ಇಂದಿನ ರಾಜಭವನವು, ಹಾಲು ಬಿಳಿ ಬಣ್ಣದಲ್ಲಿನಿರ್ಮಿಸಲಾದ ನಿರ್ಮಲ ಭವ್ಯ ರಚನೆಯಾಗಿದೆ. ಹಲವು ವರ್ಷಗಳ ಕಾಲಾವಧಿಯಲ್ಲಿ ಆದ ಎಲ್ಲಾ ಬದಲಾವಣೆಗಳನ್ನು ತನ್ನೊಳಗೆ ಅಡಗಿಸಿಕೊಂಡಿದೆ ಮತ್ತು ಇದು ಇನ್ನೂ ತನ್ನ ಪುರಾತನವಾದ ವಿಶ್ವ ಪರಂಪರೆಯನ್ನು ಮತ್ತು ಘನತೆಯನ್ನು ಉಳಿಸಿಕೊಂಡಿದೆ. ಈ ಬದಲಾವಣೆಗಳು ಈ ಮಹಲಿನಲ್ಲಿ ಸಾಮರಸ್ಯದಿಂದ ಬೆರೆತು, ಕಾಲಮಿತಿಯನ್ನು ಮೀರಿದ, ಅತೀಂದ್ರಿಯವಾದ ನೋಟವನ್ನು ನೀಡುತ್ತಿವೆ.
ರೆಸಿಡೆನ್ಸಿಯ ಗೌರವಾನ್ವಿತ ಅತಿಥಿಗಳು
ಕಳೆದು ಹೋದ ಯುಗದ ಅನೇಕ ಮಹಾನ್ ವ್ಯಕ್ತಿಗಳು ಅತಿಥಿಗಳಾಗಿ ರೆಸಿಡೆನ್ಸಿಗೆ ಭೇಟಿ ನೀಡಿ ಉಳಿದುಕೊಂಡಿದ್ದಾರೆ. ಕಬ್ಬನ್ರ ಅವಧಿಯಲ್ಲಿ ಲಾರ್ಡ್ ಮಕಾಲೆಯವರು ಇಲ್ಲಿಗೆ ಭೇಟಿ ನೀಡಿ ಮೂರು ದಿನಗಳ ಕಾಲ ತಂಗಿದ್ದರು. 1868ರ ಡಿಸೆಂಬರ್ ಮೊದಲ ವಾರದಲ್ಲಿ ಶೃಂಗೇರಿಯ ಗುರೂಜಿಯವರು ರೆಸಿಡೆನ್ಸಿಗೆ ಭೇಟಿ ನೀಡಿದ್ದು, ಬೌರಿಂಗ್ ರವರು ಅವರಿಗೆ ಹುಲ್ಲುಹಾಸಿನ ಸ್ವಾಗತ ನೀಡಿದ್ದರು.
ಇಂಗ್ಲೆಂಡಿನ ರಾಜ ಮತ್ತು ಭಾರತದ ಚಕ್ರವರ್ತಿ ಕೂಡ ಇಲ್ಲಿ ತಂಗಿದ್ದರು. ಗವರ್ನರ್ ಜನರಲ್ ನಂತರದ ಭಾರತದ ವೈಸರಾಯ್ರವರು ಸಹ ಈ ಕಟ್ಟಡದಲ್ಲಿ ಉಳಿದಿದ್ದರು. ಲಾರ್ಡ್ ಡಾಲ್ಹೌಸಿ 1855ರ ನವೆಂಬರ್ 3 ರಿಂದ 5ರ ವರೆಗೆ ಮೂರು ದಿನಗಳ ಕಾಲ ಇಲ್ಲಿ ಉಳಿದಿದ್ದರು. 1886ರ ಡಿಸೆಂಬರ್ ಅವಧಿಯಲ್ಲಿ ಲಾರ್ಡ್ ಡಫರಿನ್ ಮತ್ತು ಲೇಡಿ ಡಫರಿನ್ ಇಲ್ಲಿನ ಅತಿಥಿಗಳಾಗಿ ಬಂದಿದ್ದರು.
1889ರ ನವೆಂಬರ್ 29ರ ಶುಕ್ರವಾರದಂದು ಮೊದಲ ಬಾರಿಗೆ ಸಾಮ್ರಾಜ್ಯಶಾಹಿ ಕುಟುಂಬದ ಸದಸ್ಯರಾಗಿದ್ದ ಹಿಸ್ ರಾಯಲ್ ಹೈನೆಸ್ ಪ್ರಿನ್ಸ್ ಆಫ್ ವೇಲ್ಸ್ ಆಲ್ಬರ್ಟ್ ವಿಕ್ಟರ್ ರವರು ಬೆಂಗಳೂರಿಗೆ ಭೇಟಿ ನೀಡಿದರು.
1906ರ ಫೆಬ್ರವರಿ 05 ಮತ್ತು 06 ರಂದು ಬೆಂಗಳೂರಿಗೆ ಭೇಟಿ ನೀಡಿದ್ದ ವೇಲ್ಸ್ನ ರಾಜಕುಮಾರಿ ಮತ್ತು ರೆಸಿಡೆನ್ಸಿಯಲ್ಲಿ ತಂಗಿದ್ದರು.
ಅಲ್ಲದೆ, ಈ ನಿವಾಸ ಗೃಹದಲ್ಲಿ ಕಿಂಗ್ ಎಡ್ವರ್ಡ್ ಮತ್ತು ಅವರ ಪುತ್ರ ಸಾಕಷ್ಟು ಮನರಂಜನೆಯನ್ನು ಪಡೆದರು. ಎಲ್ಲರೂ ಒಟ್ಟಾಗಿ ಸೇರಿ ಅವರ ಸಾರ್ವಭೌಮತೆಯ ಆರೋಗ್ಯದ ಪೇಯವನ್ನು ಕುಡಿದು ಆನಂದಿಸಿದರು, ಅವರ ವಾಸ್ತವ್ಯಕ್ಕಾಗಿ ಗೋಡೆಗಳನ್ನು ಎತ್ತರಿಸಲಾಗಿತ್ತು.
ಭಾರತವು ಬ್ರಿಟಿಷರ ಆಳ್ವಿಕೆಯಿಂದ ಸ್ವಾತಂತ್ರ್ಯ ಗಳಿಸಿದ ನಂತರ, ಬೆಂಗಳೂರಿನ ರೆಸಿಡೆನ್ಸಿಯನ್ನು ‘ರಾಜಭವನ’ ಎಂದು ಘೋಷಿಸಲಾಯಿತು. ಎಂದರೆ, ಭಾರತದ ಗವರ್ನರ್ ಜನರಲ್ ರವರ ಪ್ರತಿನಿಧಿಯಾದ ಗವರ್ನರ್ ಅರ್ಥಾತ್ ರಾಜ್ಯಪಾಲರ ಬಂಗಲೆ. ಮೈಸೂರಿನ ಹಿಂದಿನ ಮಹಾರಾಜರಾದ ಜಯಚಾಮರಾಜ ಒಡೆಯರ್ ಅವರನ್ನು ರಾಜಪ್ರಮುಖ (ರಾಜಪಾಲ)ರನ್ನಾಗಿ ನೇಮಿಸಲಾಯಿತು. ಆದರೆ, ಒಡೆಯರ್ ಅವರು ಈ ಬಂಗಲೆಯಲ್ಲಿ ಎಂದೂ ವಾಸ ಮಾಡಲಿಲ್ಲ. ಏಕೆಂದರೆ ಅವರು ಬೆಂಗಳೂರಿನಲ್ಲಿ ಇಂಗ್ಲೆಂಡ್ನ ವಿಂಡ್ಸರ್ ಕ್ಯಾಸಲ್ನ ಪ್ರತಿರೂಪವಾದ ಸ್ವಂತ ಅರಮನೆಯನ್ನು ಹೊಂದಿದ್ದರು. ಜಯಚಾಮರಾಜ ಒಡೆಯರ್ ಅವರು ಮದ್ರಾಸ್ ಗವರ್ನರ್ ಆಗಿ ನೇಮಕಗೊಂಡ ನಂತರ ಮೈಸೂರು ರಾಜ್ಯಪಾಲರ ಹುದ್ದೆಯನ್ನು ತ್ಯಜಿಸಿದ 1964ನೇ ಇಸವಿಯವರೆಗೆ ರಾಜಭವನವು ಖಾಲಿಯಾಗಿ ಉಳಿದಿತ್ತು. ಆನಂತರ ಶ್ರೀ ಜನರಲ್ ನಾಗೇಶ್ ಅವರು ಉತ್ತರಾಧಿಕಾರಿಯಾಗಿ ರಾಜ್ಯಪಾಲರ ಪದವನ್ನು ವಹಿಸಿಕೊಂಡ ನಂತರ ರಾಜಭವನವು ಭರ್ತಿಯಾಯಿತು. ಅಂದಿನಿಂದ ಎಲ್ಲಾ ರಾಜ್ಯಪಾಲರು ಈ ಭವ್ಯವಾದ ಕಟ್ಟಡದಲ್ಲಿ ಉಳಿದುಕೊಂಡಿದ್ದಾರೆ.
ಸ್ವಾತಂತ್ರ್ಯೋತರ ಯುಗ:
|
ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಯು 1947ರ ಆಗಸ್ಟ್ 15ರಂದು ಕೊನೆಗೊಂಡಿತು. ಇದರೊಂದಿಗೆ ಬೆಂಗಳೂರಿನಲ್ಲಿ ರೆಸಿಡೆನ್ಸಿ ಹುದ್ದೆಯ ಅಸ್ತಿತ್ವವು ನಿಂತುಹೋಯಿತು ಮತ್ತು ಭಾರತದಲ್ಲಿನ ಎಲ್ಲ ಬ್ರಿಟಿಷ್ ರೆಸಿಡೆಂಟ್ರನ್ನು ಹಿಂದಕ್ಕೆ ಕರೆಸಿಕೊಳ್ಳಲಾಯಿತು. ಆದರೆ, ‘ರೆಸಿಡೆನ್ಸಿ’ ಎಂಬ ಹೆಸರು ಸುಮಾರು 15 ವರ್ಷಗಳ ಕಾಲ ಹಾಗೇ ಉಳಿಯಿತು.
|
ತರುವಾಯ, ಮಹಾರಾಜರನ್ನು ರಾಜ್ಯದ ರಾಜಪ್ರಮುಖರಾಗಿ ನೇಮಿಸಲಾಯಿತು. ಅವರು ಬೆಂಗಳೂರು ಮತ್ತು ಮೈಸೂರಿನಲ್ಲಿ ತಮ್ಮ ಭವ್ಯವಾದ ಅರಮನೆಗಳನ್ನು ಹೊಂದಿದ್ದರಿಂದ, ರಾಜಪ್ರಮುಖರು ವಾಸಿಸಲು ರೂಪಿಸಲಾಗಿದ್ದ ರೆಸಿಡೆನ್ಸಿಯ ಹೊಸ ವ್ಯವಸ್ಥೆಯಲ್ಲಿ ಅವರು ಉಳಿಯಲು ಬಯಸಲಿಲ್ಲ. ಆದ್ದರಿಂದ, ಸರ್ಕಾರವು ರೆಸಿಡೆನ್ಸಿಯನ್ನು ರಾಜ್ಯಅತಿಥಿಗೃಹವನ್ನಾಗಿ ಮಾಡಿತ್ತು.
ರೆಸಿಡೆನ್ಸಿಯ ಸೇವಾ ಸಿಬ್ಬಂದಿಯನ್ನು ಸಾಮಾನ್ಯ ಆಡಳಿತ ಇಲಾಖೆಯಲ್ಲಿ ಖಾಯಂಗೊಳಿಸಲಾಯಿತು. ಅನಂತರ, ಭಾರತದ ರಾಷ್ಟ್ರಪತಿಗಳು ಮತ್ತು ಉಪರಾಷ್ಟ್ರಪತಿಗಳು, ಕೇಂದ್ರ ಸರ್ಕಾರದ ಮಂತ್ರಿಗಳು, ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಮಂತ್ರಿಗಳು ಮುಂತಾದ ರಾಜ್ಯದ ಅತಿಥಿಗಳು ರೆಸಿಡೆನ್ಸಿಯಲ್ಲಿ ಉಳಿದುಕೊಳ್ಳುತ್ತಿದ್ದರು.
ರೆಸಿಡೆನ್ಸಿ ಕಟ್ಟಡದ ಮುಂಭಾಗದಲ್ಲಿರುವ ಹುಲ್ಲು ಹಾಸಿನ ಮೇಲೆ ಅಥವಾ ಬಾಲ್ ರೂಮ್ನಲ್ಲಿ ಮುಖ್ಯಮಂತ್ರಿಗಳು ಹಲವಾರು ಆತಿಥ್ಯಕೂಟಗಳನ್ನು ಹಮ್ಮಿಕೊಳ್ಳುತ್ತಿದ್ದರು ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವದಂತಹ ಸಂದರ್ಭಗಳಲ್ಲಿ ರಾಜಪ್ರಮುಖರು (ಅನಂತರ ರಾಜ್ಯಪಾಲರು) ಆತಿಥ್ಯಕೂಟಗಳನ್ನು ತಮ್ಮ ಅರಮನೆಯ ಟೆನಿಸ್ ಮೈದಾನದಲ್ಲಿ ಆಯೋಜಿಸುತ್ತಿದ್ದರು. ಪ್ರಸ್ತುತ ಈ ಆತಿಥ್ಯಕೂಟಗಳನ್ನು ರಾಜಭವನದ ಹುಲ್ಲುಹಾಸಿನ ಮೇಲೆ ಆಯೋಜಿಸಲಾಗುತ್ತಿದೆ.
1947ರಲ್ಲಿ ಕಾಂಗ್ರೆಸ್ ಮಂತ್ರಿಮಂಡಲ ರಚನೆಯಾದ ನಂತರ, ರೆಸಿಡೆನ್ಸಿಯ ಬಾಲ್ ರೂಮ್ನಲ್ಲಿ ಕಾಂಗ್ರೆಸ್ ಪಕ್ಷದ ಹಲವಾರು ಶಾಸಕಾಂಗ ಸಭೆಗಳು ನಡೆದವು. ಆಗ ವಿಧಾನಸೌಧ ಹಾಗೂ ಶಾಸಕರ ಭವನ ಇನ್ನೂ ನಿರ್ಮಾಣವಾಗಿರಲಿಲ್ಲ. ಶಾಸಕರಿಗೆ ರಾಜ್ಯದ ಅತಿಥಿಗೃಹಗಳಾದ ‘ಸುದರ್ಶನ’, ‘ಕಾರ್ಲ್ಟನ್ ಹೌಸ್’, ‘ಕುಮಾರ ಕೃಪ’, ಮತ್ತಿತರ ಸ್ಥಳಗಳಲ್ಲಿ ವಸತಿ ವ್ಯವಸ್ಥೆ ಮಾಡಲಾಗುತ್ತಿತ್ತು. ವಿಧಾನಮಂಡಲ ಅಧಿವೇಶನಗಳ ಸಂದರ್ಭಗಳಲ್ಲಿ ಕೆಲವು ಆಯ್ದ ಶಾಸಕರಿಗೆ ಮಾತ್ರ ರೆಸಿಡೆನ್ಸಿಯಲ್ಲಿ ವಸತಿ ವ್ಯವಸ್ಥೆ ನೀಡಲಾಗುತ್ತಿತ್ತು.
ಪಕ್ಷದ ಕಾರ್ಯಕಾರಿ ಸಮಿತಿಯ ಸದಸ್ಯರಾದ ಡಿ. ದೇವರಾಜ್ ಅರಸು, ಎ.ಭೀಮಪ್ಪ ನಾಯಕ, ಅಂದಿನ ಉಪಸಭಾಪತಿ ಆರ್. ಚೆನ್ನಿಗರಾಮಯ್ಯ, ಅಂದಿನ ವಿಧಾನ ಪರಿಷತ್ತಿನ ಉಪಸಭಾಧ್ಯಕ್ಷರಾದ ಗೋಪಾಲಕೃಷ್ಣ ಶೆಟ್ಟಿ ಹಾಗೂ ಇತರ ಗಣ್ಯ ವ್ಯಕ್ತಿಗಳಿಗೆ ರೆಸಿಡೆನ್ಸಿಯಲ್ಲಿ ವಸತಿ ಕಲ್ಪಿಸಲಾಗಿತ್ತು. ಅಂದಿನ ಹಣಕಾಸು ಸಚಿವರಾಗಿದ್ದ ಹೆಚ್. ದಾಸಪ್ಪ ಮತ್ತು ನ್ಯಾಯಮೂರ್ತಿ ಪಿ. ಮೇದಪ್ಪಅವರು ಸಂಜೆ ಕಚೇರಿ ಅವಧಿ ಮುಗಿದ ನಂತರ ಸಂಜೆಯ ಹೊತ್ತು ಇಲ್ಲಿ ಬಿಲಿಯರ್ಡ್ಸ್ ಆಡುತ್ತಿದ್ದರು. ಕಾರ್ಯಕಾರಿ ಸಮಿತಿ ಸಭೆಯು ಗ್ರಂಥಾಲಯದಲ್ಲಿ ಮತ್ತು ಕಾಂಗ್ರೆಸ್ ಪಕ್ಷದ ಸಭೆಗಳು ರೆಸಿಡೆನ್ಸಿಯ ಬಾಲ್ ರೂಮ್ ನಲ್ಲಿ ನಡೆಯುತ್ತಿದ್ದವು.
ಕೆಂಗಲ್ ಹನುಮಂತಯ್ಯನವರ ಕಾಲದಲ್ಲಿ ರೆಸಿಡೆನ್ಸಿಯಲ್ಲಿ ಹಲವು ಉತ್ಸಾಹಭರಿತ ಮತ್ತು ಸಂತೋಷಕರವಾದ ಆತಿಥ್ಯಕೂಟಗಳು ನಡೆಯುತ್ತಿದ್ದವು. ಅಂಥ ಒಂದು ಪ್ರಮುಖ ಸಂದರ್ಭವೆಂದರೆ ಮಿರ್ಜಾ ಇಸ್ಮಾಯಿಲ್ ಅವರಿಗೆ ನೀಡಿದ ಬೀಳ್ಕೊಡುಗೆ ಕಾರ್ಯಕ್ರಮವಾಗಿತ್ತು. ಆ ದಿನಗಳಲ್ಲಿ, ಅರಮನೆಯ ಆರ್ಕೆಸ್ಟ್ರಾ ತಂಡ ಆತಿಥ್ಯಕೂಟಗಳಲ್ಲಿ ಭಾಗವಹಿಸುತ್ತಿತ್ತು.
ಸ್ವಾತಂತ್ರ್ಯ ನಂತರದ ವರ್ಷಗಳಲ್ಲಿ ದೇಶದೊಳಗಿನ ಮತ್ತು ವಿದೇಶಗಳ ಬದುಕಿನ ಎಲ್ಲಾ ಹಂತಗಳಲ್ಲಿ ಶ್ರೇಷ್ಟರು ಮತ್ತು ಪ್ರತಿಷ್ಠಿತರು ಆದ ವ್ಯಕ್ತಿಗಳು ರಾಜ್ಯದ ಅತಿಥಿಗಳಾಗಿ ರೆಸಿಡೆನ್ಸಿಯಲ್ಲಿ ಉಳಿದಿದ್ದಾರೆ. ಇಲ್ಲವೇ ಭೇಟಿ ನೀಡಿದ್ದಾರೆ. ರೆಸಿಡೆನ್ಸಿಯಲ್ಲಿ ಉಳಿದಿದ್ದ ರಾಷ್ಟ್ರಮಟ್ಟದ ನಾಯಕರೆಂದರೆ, ಡಾ. ರಾಜೇಂದ್ರ ಪ್ರಸಾದ್, ಸರ್ದಾರ್ ವಲ್ಲಭಾಯ್ ಪಟೇಲ್, ಮೌಲಾನ್ ಅಬ್ದುಲ್ ಕಲಾಂ ಆಜಾದ್, ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ, ಡಾ. ಜಾಕಿರ್ ಹುಸೇನ್ ಮತ್ತು ಡಾ. ರಾಜಕುಮಾರಿ ಅಮೃತಾ ಕೌರ್ ಅಲ್ಲದೆ ಹಲವಾರು ಕೇಂದ್ರ ಮಂತ್ರಿಗಳು ಮತ್ತು ರಾಜ್ಯಪಾಲರುಗಳು ರೆಸಿಡೆನ್ಸಿಯಲ್ಲಿ ತಂಗಿದ್ದಾರೆ.
ವಿದೇಶದಿಂದ ಬಂದ ಅತಿಥಿಗಳಲ್ಲಿ, ಅಂದಿನ ಅಮೇರಿಕಾದ ಅಧ್ಯಕ್ಷರಾಗಿದ್ದ ರೂಸ್ವೆಲ್ಟ್ ಅವರ ಪತ್ನಿ ಎಲೀನರ್ ಅವರು ಭಾರತದ ರಾಜ್ಯ ಪ್ರವಾಸದಲ್ಲಿದ್ದಾಗ ಇಲ್ಲಿಯೇ ತಂಗಿದ್ದರು. 1947 ರಿಂದ 1964ರ ವರೆಗೆ ಭಾರತದ ಪ್ರಧಾನಿಯಾಗಿದ್ದ
|
|
ಪಂಡಿತ್ ಜವಾಹರ್ಲಾಲ್ ನೆಹರು ಅವರು ಯಾವಾಗಲೂ ಮೈಸೂರು ಮಹಾರಾಜರಾದ ಜಯಚಾಮರಾಜ್ ಒಡೆಯರ್ ರವರ ಅತಿಥಿಯಾಗಿ ಬೆಂಗಳೂರು ಅರಮನೆಯ ರಾಯಲ್ ಕಾಟೇಜ್ನಲ್ಲಿ ತಂಗುತ್ತಿದ್ದರು. ಒಂದು ಸ್ಮರಣೀಯ ಸಂದರ್ಭದಲ್ಲಿ ಅವರು ರೆಸಿಡೆನ್ಸಿಗೆ ಭೇಟಿ ನೀಡಿದ್ದರು. ಅದೇ ಸಂದರ್ಭದಲ್ಲಿ ಬಾಲ್ ರೂಮ್ನಲ್ಲಿ ಕಾಂಗ್ರೆಸ್ ಪಕ್ಷದ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಆ ಸಮಯದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರೂ ಕೂಡ ಕಾಂಗ್ರೆಸ್ ಶಾಸಕರನ್ನು ಉದ್ದೇಶಿಸಿ ಮಾತನಾಡಿದರು.
ಮತ್ತೊಂದು ಸ್ಮರಣೀಯ ಸಂದರ್ಭವೆಂದರೆ, ಭಾರತ ಗಣರಾಜ್ಯದ ಪ್ರಥಮ ರಾಷ್ಟ್ರಪತಿಗಳಾದ ಡಾ. ರಾಜೇಂದ್ರ ಪ್ರಸಾದ್ ರವರು ಮೈಸೂರು ರಾಜ್ಯಕ್ಕೆ ಭೇಟಿ ನೀಡಿದಾಗ, ರೆಸಿಡೆನ್ಸಿಯಲ್ಲಿ ಉಳಿದಿದ್ದರು. ಈ ಸಂದರ್ಭದಲ್ಲಿ, ರೆಸಿಡೆನ್ಸಿ ಕಟ್ಟಡದ ಮುಂಭಾಗದಲ್ಲಿ ರಾಷ್ಟ್ರಪತಿಗಳ ಜತೆ ಎಲ್ಲ ಸಚಿವರು ಇರುವ ಛಾಯಾಚಿತ್ರ ತೆಗೆಯಲಾಯಿತು.
ಜಯಚಾಮರಾಜ ಒಡೆಯರ್ ಅವರು ಮದ್ರಾಸ್ ರಾಜ್ಯದ ಗವರ್ನರ್ ಆಗಿ ನೇಮಕಗೊಂಡಾಗ, ರೆಸಿಡೆನ್ಸಿಯ ನಿವಾಸಿಯಾಗಿ ಮೈಸೂರು ರಾಜ್ಯದ ಹೊಸ ರಾಜ್ಯಪಾಲರು ಆಗಮಿಸಿದರು. ಅಂದಿನಿಂದ ರೆಸಿಡೆನ್ಸಿಯು ಅತಿಥಿಗೃಹವಾಗಿರುವುದು ಕೊನೆಗೊಂಡಿತು. ರೆಸಿಡೆನ್ಸಿ ಕಟ್ಟಡವು ರಾಜ್ಯಪಾಲರ ನಿವಾಸವಾದ ರಾಜಭವನವಾಗಿ ಪರಿವರ್ತಿತವಾದ ನಂತರ ರೆಸಿಡೆನ್ಸಿ ಕಟ್ಟಡದ ಉದ್ದೇಶ, ಸ್ವರೂಪ ಮತ್ತು ಕಾರ್ಯಚಟುವಟಿಕೆಗಳು ಸಂಪೂರ್ಣವಾಗಿ ಬದಲಾವಣೆಗೊಂಡವು.
ಹೀಗೆ, ಸುದೀರ್ಘವಾದ ಮತ್ತು ವಿಶಿಷ್ಟವಾದ ಇತಿಹಾಸವನ್ನು ಹೊಂದಿರುವ ರೆಸಿಡೆನ್ಸಿಯು ಕಾಲಕಾಲಕ್ಕೆ ಉಂಟಾದ ರಾಜಕೀಯ ವಿಪ್ಲವಗಳಿಗೆ ತುತ್ತಾಗದೆ ಬಂಡೆಯಂತೆ ಸ್ಥಿರವಾಗಿ ನಿಂತಿದ್ದು, ಇದು ಬ್ರಿಟಿಷ್ ಅಧಿಪತ್ಯದ ಮತ್ತು ಸಾಮ್ರಾಜ್ಯಶಾಹಿಯ ಅಧಿಕೃತ ಸಂಕೇತವಾಗಿ ಉಳಿದಿದೆ. ಈಗ, ಇದು ರಾಜ್ಯದ ಸಾಂವಿಧಾನಿಕ ಮುಖ್ಯಸ್ಥರಾದ ರಾಜ್ಯಪಾಲರ ಕೇಂದ್ರ ಸ್ಥಾನವಾಗಿದೆ. ಈ ರಾಜಭವನ ಕಟ್ಟಡವು ಎಂದಿಗೂ ತನ್ನ ಭವ್ಯತೆ ಅಥವಾ ಸೌಂದರ್ಯವನ್ನು ಕಳೆದುಕೊಳ್ಳದೆ ಅಧಿಕಾರದ ಸಂಕೇತವಾಗಿ ಉಳಿದು ಕೊಂಡಿದೆ.
ರೆಸಿಡೆಂಟರುಗಳ ಪಟ್ಟಿ
ರೆಸಿಡೆಂಟರು 1799 ರಿಂದ 1842ರ ವರೆಗೆ
|
ಕರ್ನಲ್. ಸರ್ ಬ್ಯಾರಿ ಕ್ಲೋಸ್
|
22 ಜುಲೈ 1799 ರಿಂದ ಮಾರ್ಚ್ 1801
|
ವೆಬ್. ಜೋಶಿಯಾ ಎಂ.ಸಿ.ಎಸ್
|
31 ಮಾರ್ಚ್ 1801 ರಿಂದ 1 ಫೆಬ್ರವರಿ 1803
|
ವೆಬ್. ಜೋಶಿಯಾ ಎಂ.ಸಿ.ಎಸ್
|
23 ಅಕ್ಟೋಬರ್ 1803 ರಿಂದ 1 ಫೆಬ್ರವರಿ 1804
|
ಕರ್ನಲ್ ಮಾರ್ಕ್ ವಿಲ್ಕ್ಸ್
|
ಏಪ್ರಿಲ್ 1804 ರಿಂದ ನವೆಂಬರ್ 1804
|
ಮಾಲ್ಕಮ್, ಸರ್ ಜಾನ್
|
ನವೆಂಬರ್ 1804 ರಿಂದ ಮಾರ್ಚ್ 1805
|
ಮಾಲ್ಕಮ್, ಸರ್ ಜಾನ್
|
ಏಪ್ರಿಲ್ 1807 ರಿಂದ ಫೆಬ್ರವರಿ 1808
|
ಆರ್ಥರ್ ಹೆಚ್. ಕೋಲ್
|
1809 ರಿಂದ 1812
|
ಆರ್ಥರ್ ಹೆಚ್. ಕೋಲ್
|
1818 ರಿಂದ 1827
|
ಸರ್ ಮಾರ್ಕ್ ಕಬ್ಬನ್
|
ಮೇ 1834
|
ಕರ್ನಲ್ ಫ್ರೇಸರ್, ಜೇಮ್ಸ್ ಸ್ಟುವರ್ಟ್
|
ಅಕ್ಟೋಬರ್ 1834 ರಿಂದ ಜನವರಿ 1836
|
ಮೇಜರ್ ಆರ್. ಡಿ ಸ್ಟೋಕ್ಸ್
|
19 ಜನವರಿ 1836 ರಿಂದ 31 ಡಿಸೆಂಬರ್ 1842
|
1831ರ ಅಕ್ಟೋಬರ್ 19 ರಿಂದ ರೆಸಿಡೆಂಟರಿಗೆ ಹೆಚ್ಚುವರಿಯಾಗಿ ಕಮೀಷನರುಗಳನ್ನು ನೇಮಿಸಲಾಯಿತು.
1843ರ ಜನವರಿ 1 ರಂದು, ರೆಸಿಡೆಂಟ್ ಎಂಬ ಹುದ್ದೆಯನ್ನು ರದ್ದುಗೊಳಿಸಲಾಯಿತು ಮತ್ತು ರೆಸಿಡೆಂಟ್ರ ಕರ್ತವ್ಯಗಳನ್ನು ಬೆಂಗಳೂರಿನ ಕಮೀಷನರ್ ರವರ ಕರ್ತವ್ಯಗಳೊಂದಿಗೆ ಸಂಯೋಜಿಸಲಾಯಿತು.